Posted on : Thu 05 Dec 2019
ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.1 ಕೊಲೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
2 ದರೋಡೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
3 ಸುಲಿಗೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
4 ಹಲ್ಲೆ ಪ್ರಕರಣ 02 ವಿದ್ಯಾರಣ್ಯಪುರಂ ಠಾಣೆ
ಫಿರ್ಯಾದಿ ಶ್ರೀಮತಿ ತಬಸುಮಾ ರವರು ದಿನಾಂಕ 04-12-2019 ರಂದು ರಾತ್ರಿ ಸುಮಾರು 9-15 ಗಂಟೆಯಲ್ಲಿ ತಮ್ಮ ಮನೆಯ ಹತ್ತಿರ ಪ್ರಮೀಳಾ ಎಂಬುವವರ ಜೊತೆ ಮಾತನಾಡುತ್ತಿದ್ದಾಗ ಆರೋಪಿ ಅಶೋಕ ರವರು ನೀನು ತೆಗೆದುಕೊಂಡ ದುಡ್ಡು ಕೊಡದೆ ಸತಾಯಿಸುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ತುಟಿಗೆ ಹೊಡೆದು ಗಾಯವನ್ನುಂಟು ಮಾಡಿದ್ದಲ್ಲದೆ ಗಂಡನಿಗೂ ಸಹಾ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾನೆ ಎಂದು ಇತ್ಯಾದಿಯಾಗಿ ನೀಡಿದ ದೂರು.
ವಿ.ವಿ ಪುರಂ ಠಾಣೆ
ಪಿರ್ಯಾದಿ ಪ್ರತಿಮಾ ರವರು ದಿ:04-12-19 ರಂದು ಬೆಳಿಗ್ಗೆ 9.30 ಗಂಟೆಯ ಸಮಯದಲ್ಲಿ ನಾನು ಕೆಲಸಕ್ಕೆಂದು ಒಂಟಕೊಪ್ಪಲಿನ ಚಂದ್ರೋದಯ ಆಸ್ಪತ್ರೆಯ ಬಳಿ ಹೋಗುತ್ತಿರುವಾಗ್ಗೆ ಅಮೃತ್ ನ ಸ್ನೇಹಿತರು ಹಿಂದಿನಿಂದ ಬಂದು ರೈಸರ್ ನಿಂದ ಇರಿದು, ಅಮೃತನ ವಿಷಯಕ್ಕೆ ಇನ್ನು ಮುಂದೆ ಹೋದರೆ ನಿನ್ನ ಪ್ರಾಣವನ್ನು ತೆಗೆಯುವಿದಾಗಿ ಬೆದರಿಕೆ ನೀಡಿರುತ್ತಾರೆಂದು, ಅಮೃತ್ ಎಂಬುವವನು ನನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದು, ಆದರೆ ನಾನು ನಿರಾಕರಿಸುತ್ತಿದ್ದರಿಂದ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದು ಹೋಗುತ್ತಿದ್ದು, ನಾನು ಎಷ್ಟೇ ಬಾರಿ ಹೇಳಿದರೂ ಅಮೃತನು ಕಿವಿಕೊಡದೇ ಈ ಬಾರಿ ನನಗೆ ರೈಸರ್ ನಿಂದ ಹಲ್ಲೆ ಮಾಡಿಸಿರುತ್ತಾನೆ. ಇದರಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ನೊಂದಿರುತ್ತೇನೆ. ನಮ್ಮ ಮನೆಯವರ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ. ನನಗೆ ಪ್ರೀತಿಸುವಂತೆ ಪೀಡಿಸಿ, ನಾನು ನಿರಾಕರಿಸಿದ್ದರಿಂದ ತನ್ನ ಸ್ನೇಹಿತರನ್ನು ಕಳುಹಿಸಿ ನನ್ನ ಮೇಲೆ ರೈಸರ್ ನಿಂದ ಹಲ್ಲೆ ಮಾಡಿಸಿರುವ ಅಮೃತ್ ಮತ್ತು ಆತನ ಸ್ನೇಹಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.
5 ಮನೆಕಳವುಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
6 ಸಾಮಾನ್ಯಕಳವು - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
7 ವಾಹನ ಕಳವು 02 ದೇವರಾಜ ಠಾಣೆ
ದಿನಾಂಕ 29/11/2019 ರಂದು ಪಿರ್ಯಾದಿ ರಾಜೇಂದ್ರ ರವರ ಭಾವ ಅಭಿಕುಮಾರ ರವರು ಪಿರ್ಯಾದಿಯವರ ಬೈಕ್ ನಂ ಕೆಎ-55 ಕ್ಯೂ-9607 ನ್ನು ಊಟ ಕೊಡುವ ಸಲುವಾಗಿ ಚೆಲುವಾಂಬ ಆಸ್ಪತ್ರೆಗೆ ಬಂದಿದ್ದು ರಾತ್ರಿ 07-30 ಗಂಟೆಯ ಸಮಯದಲ್ಲಿ ಚೆಲುವಾಂಬ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದು ವಾಪಸ್ಸು ಬೆಳಿಗ್ಗೆ 8-00 ಗಂಟೆಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ ಕಳವು ಆಗಿರುತ್ತದೆ ಪತ್ತೆಗಾಗಿ ದೂರು. ವಿಜಯನಗರ ಠಾಣೆ
ಪಿರ್ಯಾದಿ ಮಹದೇವಸ್ವಾಮಿ ರವರು ದಿನಾಂಕ:21.11.2019 ರಂದು ರಾತ್ರಿ 10-00 ಗಂಟೆ ಸಮಯುದಲ್ಲಿ ಹೋಂಡಾಶೈನ್ ಕೆಎ-09-ಹೆಚ್ಟಿ-5324 ಅನ್ನು ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ:22.11.2019 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ನೋಡಲಾಗಿ ಬೈಕ್ ಇರಲಿಲ್ಲ. ನಾನು ಎಲ್ಲ ಕಡೆ ನೋಡಲಾಗಿ ಸಿಕ್ಕಿರುವುದಿಲ್ಲ. ಇದುವರೆಗೂ ಸಹ ಎಲ್ಲರನ್ನೂ ವಿಚಾರಿಸಲಾಗಿ, ಎಲ್ಲಿಯೂ ಸಿಗದ ಕಾರಣ ಈ ದಿನ ಬಂದು ದೂರನ್ನು ನೀಡುತ್ತಿದ್ದು, ಕಳವಾಗಿರುವ ನನ್ನ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ದೂರು .
8 ಮಹಿಳಾದೌರ್ಜನ್ಯ
ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
9 ರಸ್ತೆ ಅಪಘಾತ 02 ಕೃಷ್ಣರಾಜ ಸಂಚಾರ ಠಾಣೆ
ದಿನಾಂಕ 03/12/2019 ರಂದು ಪಿರ್ಯಾದಿ ಶಿವರುದ್ರಯ್ಯ ರವರ ಬಾಮೈದ ಬಸವರಾಜು ರವರು ಅಶೋಕ ಲೈಲ್ಯಾಂಡ್ ಎಲ್.ಜಿ.ವಿ ನಂ KA-54-4886 ರಲ್ಲಿ ಈರುಳ್ಳಿಯನ್ನು ಮೈಸೂರಿನ ಎ.ಪಿ.ಎಂ.ಸಿ ಮಾರ್ಕೇಟ್ ಗೆ ಹಾಕಲು ಲೋಡ್ ಮಾಡಿಕೊಂಡು ಅದೇ ಗಾಡಿಯಲ್ಲಿ ಮುಂದಿನ ಎಡಭಾಗದ ಸೀಟಿನಲ್ಲಿ ಕುಳಿತುಕೊಂಡು ಬಂದಿದ್ದು ಎ.ಪಿ.ಎಂ.ಸಿ ಗೆ ಹೋಗುತ್ತಿದ್ದು ಬೆಳಿಗಿನ ಜಾವ 03.10 ಗಂಟೆಯಲ್ಲಿ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಸಚ್ಚಿದಾನಂದ ಆಶ್ರಮದ ಎದುರು ಎಲ್.ಜಿ.ವಿ ಚಾಲಕ ಚೆಲುವರಾಜು ಸ್ವೀಡಾಗಿ ಓಡಿಸಿಕೊಂಡು ಹೋಗುತ್ತಿದ್ದು ಮುಂದೆ ಹೋಗುತ್ತಿದ್ದ ಇನ್ನೊಂದು ಎಲ್.ಜಿ.ವಿಯನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಎಡಕ್ಕೆ ಚಾಲನೆ ಮಾಡಿದಾಗ ರಸ್ತೆ ಎಡಭಾಗದಲ್ಲಿದ್ದ ಸೇತುವೆ ಸಿಮೆಂಟ್ ಕಟ್ಟೆಗೆ ಡಿಕ್ಕಿ ಮಾಡಿದ್ದು ಎಡಕಾಲಿಗೆ ತುಂಬಾ ಏಟಾಗಿರುವುದಾಗಿ ತಿಳಿಸಿದ್ದರಿಂದ ಪಿರ್ಯಾದುದಾರರು ಕೂಡಲೇ ಸ್ಥಳಕ್ಕೆ ಹೋಗಿದ್ದು ಅಷ್ಟರಲ್ಲಿ ಅಲ್ಲಿದ್ದವರು 108 ಅಂಬ್ಯೂಲೆನ್ಸ್ ಕರೆಸಿ ಗಾಯಗೊಂಡಿದ್ದ ಬಸವರಾಜು ರವರನ್ನು ಅಂಬ್ಯೂಲೆನ್ಸ ನಲ್ಲಿ ವಿದ್ಯರಣ್ಯ ಆಸ್ಪತ್ರೆಗೆ ಕಳುಹಿಸಿದ್ದು ಈ ಅಪಘಾತಕ್ಕೆ ಅಶೋಕ ಲೈಲ್ಯಾಂಡ್ ಎಲ್.ಜಿ.ವಿ ನಂ KA-54-4886 ರ ಚಾಲಕ ಅತೀವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿರುವುದೇ ಕಾರಣವಾಗಿದ್ದು ಬಸವರಾಜು ರವರಿಗೆ ಚಿಕಿತ್ಸೆ ಮಾಡಿಸುತ್ತಿದ್ದರಿಂದ ಈ ದಿನ ಬಂದು ದೂರು ನೀಡುತ್ತಿದ್ದು ಅಪಘಾತಕ್ಕೆ ಕಾರಣನಾದ ಎಲ್.ಜಿ,.ವಿ ವಾಹನ ಚಾಲಕ ಚೆಲುವರಾಜು ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.
ವಿ.ವಿ ಪುರಂ ಸಂಚಾರ ಠಾಣೆ
ದಿನಾಂಕ 02-12-2019 ರಂದು ಬೆಳಿಗ್ಗೆ 8:00ಗಂಟೆಯ ಸಮಯದಲ್ಲಿ ಪಿರ್ಯಾದಿ ರಶ್ಮಿ ರವರ ತಮ್ಮ ಮೋ,ಸೈ ಕೆಎ-09-ಹೆಚ್ ಎಫ್-0517 ಇದನ್ನು ಮುಖ್ಯರಸ್ತೆ ವಿಜಯನಗರ 4ನೇ ಹಂತ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಕಾರು ನಂ ಕೆಎ-09-ಎಮ್ ಈ-5257 ಚಾಲಕ ಅತೀ ವೇಗ ಹಾಗೂ ಅಜಾಗರೂಕತಿಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾಧಿಯವರ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾಧಿ ಪ್ರದೀಪ್ ಅವರ ಎಡಕಾಲಿನ ಬೆರಳು ಮುರಿದಿದ್ದು ಸಾರ್ವಜನಿಕರ ಸಹಾಯದಿಂದ ಪ್ರಲಾಕ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿರುತ್ತದೆ ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ಕಾರು ನಂ ಕೆಎ-09-ಎಮ್ ಈ-5257 ಚಾಲಕ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.
10 ವಂಚನೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
11 ಮನುಷ್ಯಕಾಣೆಯಾದ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
12 ಅನೈಸರ್ಗಿಕ ಸಾವು ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
13 ಇತರೆ ಪ್ರಕರಣಗಳು - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
Read more...